ಬೆಂಗಳೂರು: ಕೆಲವು ದಿನಗಳ ಹಿಂದೆ ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಟ್ವಿಟರ್ ನಲ್ಲಿ ಅಭಿಯಾನವೇ ಶುರುವಾಗಿತ್ತು. ಅದರಲ್ಲಿ ನಟಿ ರಶ್ಮಿಕಾ ಮಂದಣ್ಣ ಕೂಡಾ ಪಾಲ್ಗೊಂಡಿದ್ದರು.ಎಮರ್ಜೆನ್ಸಿ ಹಾಸ್ಪಿಟಲ್ ಫಾರ್ ಕೊಡಗು ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಆರಂಭವಾಗಿದ್ದ ಅಭಿಯಾನದಲ್ಲಿ ಕೊಡಗು ಮೂಲದವರಾದ ರಶ್ಮಿಕಾ ಕೂಡಾ ಕೈ ಜೋಡಿಸಿದ್ದರು. ಅಷ್ಟೇ ಅಲ್ಲ, ನೇರವಾಗಿ ಸಂಸದ ಪ್ರತಾಪ್ ಸಿಂಹಗೆ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಮನವಿಯನ್ನೂ ಮಾಡಿದ್ದರು.ಆ ವಿಚಾರಕ್ಕೀಗ ಸಂಸದ ಪ್ರತಾಪ್