ಮಂಡ್ಯ: ಪ್ರಾಣಿಪ್ರಿಯರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೋ ಶಾಲೆಗಳಿಗೆ ಮೇವು ಒದಗಿಸುವ ಮೂಲಕ ಸುದ್ದಿಯಾಗಿದ್ದರು. ಇದೀಗ ರಾಕಿಂಗ್ ಸ್ಟಾರ್ ಯಶ್ ಕೂಡಾ ಅವರದ್ದೇ ಹಾದಿಯಲ್ಲಿದ್ದಾರೆ. ಪಾಂಡವಪುರ ತಾಲೂಕಿನ ಗೋಶಾಲೆಗೆ ಹೆಚ್ಚುವರಿ ಶೆಡ್ ನಿರ್ಮಾಣ ಮಾಡಲು ನೆರವು ಬೇಕಾಗಿತ್ತು. ಇದಕ್ಕಾಗಿ ಕಳೆದ ಎರಡು ತಿಂಗಳಿನಿಂದ ರಾಕಿಂಗ್ ಸ್ಟಾರ್ ಯಶ್ ತಮ್ಮ ಯಶೋಮಾರ್ಗ ಸಂಸ್ಥೆ ಮೂಲಕ ನೆರವು ನೀಡುತ್ತಿದ್ದಾರೆ. ಇದಕ್ಕೆ ಸುಮಾರು 15 ಲಕ್ಷ ರೂ. ಖರ್ಚಾಗಲಿದ್ದು, ಅದನ್ನು ಅವರು ತಮ್ಮ ಸಂಸ್ಥೆ