ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪಾಳಯದಲ್ಲಿರುವ ಶಾಸಕರಿಗೆ ಗಾಳ ಹಾಕುವ ಪರೋಕ್ಷ ಪ್ರಯತ್ನವನ್ನು ಸಂಸದ ಧರ್ಮಸಿಂಗ್ ನಡೆಸಿದ್ದರೆ, ಇದಕ್ಕೆ ನಾನು ಸಿದ್ಧ ಎಂಬಂತೆ 'ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದೆ' ಎಂದು ಹೇಳುವ ಮೂಲಕ ಕೆಜೆಪಿ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಅಚ್ಚರಿ ಮೂಡಿಸಿದರು.