ಬಿ.ಸಿ. ರೋಡ್`ನಲ್ಲಿ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ನರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಸಹಿಪದ ಅಬ್ದುಲ್ ಶಾಫಿ, ಮತ್ತು ಚಾಮರಾಜನಗರದ ಪಿಎಫ್`ಐ ಕಾರ್ಯಕರ್ತ ಖಲೀಲ್ ವುಲ್ಲಾ ಬಂಧಿತರು. ಅಬ್ದುಲ್ ಶಾಫಿ ಸಹ ಪಿಎಫ್`ಐ ಕಾರ್ಯಕರ್ತ ಎನ್ನಲಾಗಿದೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಆರೋಪಿಗಳ ಬಂಧನದ ವಿಷಯವನ್ನ ಖಚಿತಪಡಿಸಿದ್ದಾರೆ. ಎಸ್ಪಿ, ಎಸ್ಪಿ, ಇನ್ಸ್`ಪೆಕ್ಟರ್ ಸೇರಿದಂತೆ 30 ಪೊಲೀಸ್ ಅಧಿಕಾರಿಗಳ ತಂಡ