ರಾಜ್ಯ ಸಚಿವ ಸಂಪುಟ ವಿಸ್ತರಣೆ ಆದರೆ ನಾನೂ ಸಚಿವನಾಗುವೆ. ಈಗಾಗಲೇ ಮೂರು ಸಲ ಶಾಸಕನಾಗಿದ್ದೇನೆ. ಹೀಗಂತ ಹೇಳೋ ಮೂಲಕ ಸಿಎಂ ಮೇಲೆ ಒತ್ತಡ ತಂತ್ರಕ್ಕೆ ಬಿಜೆಪಿ ಶಾಸಕರು ಮುಂದಾಗಿದ್ದಾರೆ. ಪಕ್ಷ ನೀಡೋ ಜವಾಬ್ದಾರಿಯನ್ನು ಮಾಡೇ ಮಾಡ್ತೀನಿ. ಹೀಗಂತ ಸಿಎಂ ಆಪ್ತ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಸಿಎಂ ಒಬ್ಬರೇ ಸಾಕು. ಇನ್ನೂ ಹೆಚ್ಚಿನ ಡಿಸಿಎಂಗಳನ್ನ ಮಾಡೋದು ಬೇಡ ಎಂದಿರೋ ರೇಣುಕಾರ್ಯ, ನಾನೂ ಸಚಿವ