ನೀನು ನನಗೆ ಲೈನ್ ಹೊಡೆಯಲೇಬೇಕು. ಇಲ್ಲದಿದ್ದರೆ ಮಾಡಬಾರದ್ದನ್ನ ಮಾಡ್ತಿನಿ ಅಂತ ಬೆದರಿಕೆ ಹಾಕಿದ ಯುವಕನಿಗೆ ಸರಿಯಾದ ಪಾಠವೇ ಆಗಿದೆ. ಹೈಸ್ಕೂಲ್ ಓದುತ್ತಿದ್ದ ಹುಡುಗಿಯ ಹಿಂದೆ ಬಿದ್ದು ಲವ್ ಮಾಡು ಅಂತ ಕಿರುಕುಳ ನೀಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಮೈಸೂರಿನ ಹುಣಸೂರಿನ ರಾಮಚಂದ್ರ ಬಂಧಿತ ಯುವಕನಾಗಿದ್ದಾನೆ. ತನ್ನ ಹಳ್ಳಿಯ ಹೈಸ್ಕೂಲ್ ಓದುತ್ತಿದ್ದ ಹುಡುಗಿ ಹಿಂದೆ ಬಿದ್ದು ಪ್ರೀತಿ ಮಾಡು ಅಂತ ಕಿರುಕುಳ ನೀಡುತ್ತಿದ್ದನು. ಯುವಕನ ಕಿರಿಕಿರಿಯಿಂದ ರೋಸಿಹೋದ ಹುಡುಗಿಯ ಮನೆಯವರು