ಬೆಂಗಳೂರು: ಮಳೆಗಾಲ ಮುಗಿದು ಚಳಿಗಾಲ ಬರುವ ಸಮಯವಾದರೂ ರಾಜ್ಯ ರಾಜಧಾನಿಯಲ್ಲಿ ಮಳೆ ನಿಂತಿಲ್ಲ. ವಾರದ ಬಿಡುವಿನ ನಂತರ ಮಳೆ ಅಬ್ಬರಿಸಿದ್ದು ಜನ ಜೀವನ ಮತ್ತೆ ಸಂಕಷ್ಟಕ್ಕೀಡಾಗಿದೆ.