ಚಿಕ್ಕಮಗಳೂರು :ರಾಮ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವವನು. ಅನಂತ್ ಕುಮರ್ ಅವರ ಹೇಳಿಕೆಯಲ್ಲಿ ಸತ್ಯವಿದೆ. ಮೊಘಲ್ ದೊರೆಗಳ ಸಮಯದಲ್ಲಿ 42 ಸಾವಿರ ದೇಗುಲಗಳನ್ನು ಧ್ವಂಸ ಮಾಡಿ ಮಸೀದಿ ನಿರ್ಮಿಸಿರುವುದು ನಿಜ. ಆದರೆ ಭಾರತೀಯ ಮುಸಲ್ಮಾನರು ದಾಳಿಕೋರರೊಡನೆ ಗುರುತಿಸಿಕೊಳ್ಳುವುದಿಲ್ಲ ಎಂದು ನುಡಿದ ಸಿ.ಟಿ. ರವಿ, ಇನ್ನೊಬ್ಬರ ಸ್ಥಳದ ಮೇಲೆ ಆಕ್ರಮಣ ಮಾಡಿ ಕಟ್ಟಿರುವ ಮಸೀದಿಯಲ್ಲಿ ನಮಾಜ್ ಮಾಡಿದರೆ ಅದು ಹರಾಮ್ ಎಂದು ಅನಿಸಬಹುದೆಂದು ಹೇಳಿದ್ದಾರೆ.