ಬೆಂಗಳೂರು: ದೀಪಾವಳಿ ಈ ಬಾರಿ ಪಟಾಕಿ ಹೊಡೆದು ಸಂಭ್ರಮಿಸಲು ನೀವೇನಾದರೂ ತಯಾರಿ ನಡೆಸಿದ್ದೀರಾ? ಹಾಗಿದ್ದರೆ ನಿಮ್ಮ ಎಚ್ಚರಿಕೆಯಲ್ಲಿ ನೀವಿರುವುದು ಒಳ್ಳೆಯದು.ದೀಪಾವಳಿ ಬಂತೆಂದರೆ ಗುಂಪು ಕಟ್ಟಿಕೊಂಡು, ಬೀದಿಗೆ ಬಂದು ಪಟಾಕಿ ಹೊಡೆಯುವುದರಿಂದ ಇದುವರೆಗೆ ಕಣ್ಣು, ಕೈಗೆ ಅಪಾಯ ತಂದುಕೊಳ್ಳುವುದಿತ್ತು. ಆದರೆ ಅದರ ಜತೆಗೆ ಈ ಬಾರಿ ಕೊರೋನಾ ಅಪಾಯವೂ ಸೇರಿಕೊಂಡಿದೆ. ಈ ರೀತಿ ಗುಂಪು ಗುಂಪಾಗಿ ಸೇರುವುದರಿಂದ ಕೊರೋನಾ ಹರಡುವ ಅಪಾಯವಿದೆ. ಹೀಗಾಗಿ ಸಂಭ್ರಮಾಚರಣೆ ನೆಪದಲ್ಲಿ ನಮ್ಮ ಸುರಕ್ಷತೆ ನಾವು ಮರೆಯದೇ