ಬಸ್ ಕಂಡಕ್ಟರ್ ಹೇಳಿದಾಗ ಚಿಲ್ಲರೆ ಇಲ್ಲ ಸರ್ ಎಂದು ಪ್ರಯಾಣಿಕರು ಹೇಳುತ್ತಾರೆ. ಬೆಳಗ್ಗೆ ಬೆಳಗ್ಗೆ ನಾನು ಎಲ್ಲಿಂದ ಚಿಲ್ಲರೆ ಕೊಡಲಿ ಅಂತ ಕಂಡೆಕ್ಟರ್ ಹೇಳುತ್ತಾರೆ. ಹೀಗೆ ಆರಂಭವಾಗುವ ಚಿಲ್ಲರೆ ಗಲಾಟೆಗೆ ಬ್ರೇಕ್ ಹಾಕೋದಕ್ಕೆ ಬಿಎಂಟಿಸಿ , ಆನ್ಲೈನ್ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.ಕೊರೋನಾ ಹೆಚ್ಚಾಗಿದ್ದ ಸಂದರ್ಭದಲ್ಲಿ ಬಿಎಂಟಿಸಿ ನಗದು ರಹಿತ ಟಿಕೆಟ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ನಂತರ ಅನೇಕ ಸಮಸ್ಯೆಗಳು ಕಂಡುಬಂದು ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಜಾರಿ ಮಾಡಲು ಬಿಎಂಟಿಸಿ ಮುಂದಾಗಿದೆ.