ರಾಜ್ಯದಲ್ಲಿ ನಡೆಯಲಿರೋ ಉಪಚುನಾವಣೆಗಾಗಿ ಟಿಕೆಟ್ ಪಡೆದುಕೊಳ್ಳಲಿ ಕಾಂಗ್ರೆಸ್ ನಲ್ಲಿ ಭಾರೀ ಕಸರತ್ತುಗಳು ಶುರುವಾಗಿವೆ. ಪ್ರತಿಷ್ಠಿತ ಶಿವಾಜಿ ನಗರ ಕ್ಷೇತ್ರದಿಂದ ಹೊಸಬರಿಗೆ ಟಿಕೆಟ್ ನೀಡಬೇಕು. ಹೀಗಂತ ಕೈ ಪಡೆಯ ಮುಖಂಡರು ಹೈಕಮಾಂಡ್ ಗೆ ಒತ್ತಾಯ ಮಾಡಿದ್ದಾರೆ.ಎರಡು ಲೋಕಸಭೆ ಚುನಾವಣೆಗಳಲ್ಲಿ ಸೋಲು ಕಂಡಿರೋ ರಿಜ್ವಾನ್ ಅರ್ಷದ್ ಗೆ ಯಾವುದೇ ಕಾರಣಕ್ಕೆ ಟಿಕೆಟ್ ಕೊಡಬಾರದು.ಕಾಂಗ್ರೆಸ್ ಗೆಲುವು ಕಾಣಲು ಹೊಸ ಮುಖಕ್ಕೆ ಆದ್ಯತೆ ನೀಡಬೇಕೆಂದು ಕಾಂಗ್ರೆಸ್ ಮುಖಂಡರು ಒತ್ತಾಯ ಮಾಡಿದ್ದಾರೆ.