ಅಮೆರಿಕದ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ್ದ ಭಾಷಣದ 125ನೇ ವರ್ಷಾಚರಣೆ ಮತ್ತು ಪಂಡೀತ್ ದೀನ ದಯಾಳ್ ಉಪಾಧ್ಯಾಯ್ ಅವರ 100ನೇ ವರ್ಷಾಚರಣೆ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರಮೋದಿ ದೆಹಲಿಯ ವಿಜ್ಞಾನ ಭವನದಲ್ಲಿ ಭಾಷಣ ಮಾಡಿದರು. ಈ ಭಾಷಣವನ್ನ ಪ್ರತಿಯೊಬ್ಬರೂ ಕೇಳಲೇಬೇಕೆಂದು ಮೈಸೂರು ವಿಶ್ವವಿದ್ಯಾಲಯ ಮತ್ತು ಉಜಿಸಿ ಆದೇಶ ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.