ಬೆಂಗಳೂರು: ಡಿಸೆಂಬರ್ 13ರಿಂದ ಆರಂಭವಾಗಬೇಕಿದ್ದ ಸಿಎಂ ಸಿದ್ದರಾಮಯ್ಯ ಅವರ ಜನಾಶೀರ್ವಾದ ಯಾತ್ರೆ ರದ್ದಾಗಿದೆ. ಪಕ್ಷದೊಳಗಿನ ಆಂತರಿಕ ಜಗಳವೇ ಇದಕ್ಕೆ ಕಾರಣವಂತೆ. ಯಾತ್ರೆ ಬದಲು ಡಿಸೆಂಬರ್ 13ರಿಂದ ತಾಲೂಕು, ಜಿಲ್ಲೆ ಪ್ರವಾಸ ಮಾಡುವುದರ ಕುರಿತು ಸಿಎಂ ನಿರ್ಧಾರ ಮಾಡಿದ್ದಾರೆ. ಸಿ.ಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಡುವಿನ ಆತಂರಿಕ ಕಲಹದಿಂದ ಯಾತ್ರೆ ರದ್ದಾಗಿದೆ. ಸಿಎಂ ಯಾತ್ರೆಯಲ್ಲಿ ಪಾಲ್ಗೊಳ್ಳಲು ಪರಮೇಶ್ವರ್ ನಕಾರದ ಹಿನ್ನೆಲೆ ಈ ಯಾತ್ರೆ ರದ್ದಾಗಿದೆಯಂತೆ. ತಮ್ಮ ರಾಜಕೀಯ ವರ್ಚಸ್ಸು ಹೆಚ್ಚಿಸಿಕೊಳ್ಳಲು