ಬೆಂಗಳೂರು: ಡಿಸೆಂಬರ್ 13ರಿಂದ ಆರಂಭವಾಗಬೇಕಿದ್ದ ಸಿಎಂ ಸಿದ್ದರಾಮಯ್ಯ ಅವರ ಜನಾಶೀರ್ವಾದ ಯಾತ್ರೆ ರದ್ದಾಗಿದೆ. ಪಕ್ಷದೊಳಗಿನ ಆಂತರಿಕ ಜಗಳವೇ ಇದಕ್ಕೆ ಕಾರಣವಂತೆ. ಯಾತ್ರೆ ಬದಲು ಡಿಸೆಂಬರ್ 13ರಿಂದ ತಾಲೂಕು, ಜಿಲ್ಲೆ ಪ್ರವಾಸ ಮಾಡುವುದರ ಕುರಿತು ಸಿಎಂ ನಿರ್ಧಾರ ಮಾಡಿದ್ದಾರೆ.