ಬೆಂಗಳೂರು : ಸಾಕ್ಷಿಯ ಸಾಕ್ಷ್ಯವನ್ನು ಅಪರಾಧದ ಆರೋಪಿತ ವ್ಯಕ್ತಿಯ ವಕೀಲನ ಸಮಕ್ಷಮದಲ್ಲಿ ಆಡಿಯೋ-ವೀಡಿಯೋ ವಿದ್ಯುನ್ಮಾನ ವಿಧಾನಗಳ ಮೂಲಕ ದಾಖಲಿಸಲು ಅವಕಾಶ ಕಲ್ಪಿಸುವ ದಂಡ ಪ್ರಕ್ರಿಯ ಸಂಹಿತೆ (ಕರ್ನಾಟಕ ತಿದ್ದುಪಡಿ ವಿಧೇಯಕ) 2021ಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆಯಿತು. ಶಾಸನ ರಚನಾ ಕಲಾಪದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಡಿಸಿದ ಈ ವಿಧೇಯಕಕ್ಕೆ ಸರ್ವಾನುಮತದ ಒಪ್ಪಿಗೆ ದೊರೆಯಿತು.