ಬೆಂಗಳೂರು: ಇದೇ 23ರಿಂದ ಶುರುವಾಗಲಿರುವ ʼಟೋಕಿಯೋ ಒಲಿಂಪಿಕ್ಸ್-2020ʼ ಕ್ರೀಡಾಕೂಟದಲ್ಲಿನ ಭಾರತೀಯ ಆಟಗಾರರಿಗೆ ಉತ್ತೇಜನೆ ನೀಡುವ `ಚೀರ್ 4 ಇಂಡಿಯಾ’ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಯುವಕರಿಗೆ ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕರೆ ನೀಡಿದ್ದಾರೆ.