ರಾಮನಗರ: ಪ್ರಜ್ವಲ್ ರೇವಣ್ಣ ಮಾಧ್ಯಮಗಳ ಎದುರು ಮಾತನಾಡುವುದನ್ನೇ ಕೆಲವರು ಮನರಂಜನೆ ಎಂದುಕೊಂಡಿದ್ದಾರೆ. ಆದರೆ ನಾನು ಮನರಂಜನೆಗೆ ಅವಕಾಶ ನೀಡುವುದಿಲ್ಲ. ನನಗೆ ಬೆಳೆಸುವುದೂ ಗೊತ್ತು. ತೀರಾ ಚೇಷ್ಠೆ ಮಾಡಿದರೆ ಹೊರಹಾಕುವುದೂ ಸಹ ಗೊತ್ತು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಮೊಮ್ಮಗನ ವಿರುದ್ಧ ಗುಡುಗಿದ್ದಾರೆ. ಮ್ಯಾಗ್ನೋಲಿಯಾ ಕ್ಲಬ್ನಲ್ಲಿ ಮಾತನಾಡಿದ ಅವರು, ರೇವಣ್ಣನ ಮಗ ಪ್ರಜ್ವಲ್ ರಾಜಕೀಯದಲ್ಲಿ ಬೆಳೆಯುವುದು ನಿಶ್ಚಿತ. ಅದನ್ನು ತಪ್ಪಿಸೋಕೆ ಯಾರಿಂದಲೂ ಆಗುವುದಿಲ್ಲ. ಅವರ ಹಣೆಬರಹ ಏನಿದೆಯೋ ಅದನ್ನು