ರಾಮನಗರ: ಪ್ರಜ್ವಲ್ ರೇವಣ್ಣ ಮಾಧ್ಯಮಗಳ ಎದುರು ಮಾತನಾಡುವುದನ್ನೇ ಕೆಲವರು ಮನರಂಜನೆ ಎಂದುಕೊಂಡಿದ್ದಾರೆ. ಆದರೆ ನಾನು ಮನರಂಜನೆಗೆ ಅವಕಾಶ ನೀಡುವುದಿಲ್ಲ. ನನಗೆ ಬೆಳೆಸುವುದೂ ಗೊತ್ತು. ತೀರಾ ಚೇಷ್ಠೆ ಮಾಡಿದರೆ ಹೊರಹಾಕುವುದೂ ಸಹ ಗೊತ್ತು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಮೊಮ್ಮಗನ ವಿರುದ್ಧ ಗುಡುಗಿದ್ದಾರೆ.