BMRCLನಿಂದ ನಿರ್ಮಾಣಗೊಂಡಿರೋ ರಸ್ತೆ ತಡೆಗೋಡೆ ಕುಸಿತವಾದ ಹಿನ್ನೆಲೆ, ಶಾಸಕ ದಿನೇಶ್ ಗುಂಡೂರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರಿನಲ್ಲಿ ದಿನನಿತ್ಯ ಮಳೆ ಬರ್ತಿದೆ. ಇಷ್ಟೊಂದು ಮಳೆ ಆಗ್ತಿರೋದನ್ನ ನಾವು ನೋಡಿರ್ಲಿಲ್ಲ. ಮೆಟ್ರೋದವರು ಕಾಂಪೌಂಡ್ ಹಾಕಿದ್ರು ಸಹ ಈ ಅನಾಹುತ ಆಗಿದೆ, ಈ ವೇಳೆ ಸದ್ಯ ಯಾರು ಇರ್ಲಿಲ್ಲ. ಏನು ನಷ್ಟ ಆಗಿದೆ ಅದನ್ನ ಸರ್ಕಾರ ಭರಿಸಬೇಕು. ಸುರಕ್ಷತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.