ನೂತನ ಸರ್ಕಾರದಲ್ಲಿ ವರ್ಗಾವಣೆ ದಂಧೆ ಹೆಚ್ಚಾಗುತ್ತಿದ್ದು ಸಿಎಂ ಕಚೇರಿ ಸಿಬ್ಬಂದಿಗಳು ವರ್ಗಾವಣೆ ಫೈಲ್ ಟೈಪಿಸುದ್ರಲ್ಲೇ ಬ್ಯೂಸಿ ಆಗಿದ್ದಾರೆ ಅಂತಾ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ರು. ಹಾಗೆ ಒಂದೇ ಹುದ್ದೆಗೆ ನಾಲ್ವರಿಗೆ ಶಿಪಾರಸ್ಸು ಪತ್ರ ಕೊಟ್ಟಿದ್ದು ಕೂಡ ದೊಡ್ಡ ಚರ್ಚೆಯಾಗ್ತಿದೆ. ಬಿಜೆಪಿ ಪದೇ ಪದೇ ಎಟಿಎಂ ಸರ್ಕಾರ ಅಂತ ಜರಿಯುತ್ತಿದೆ.ಹೀಗಾಗಿ ನಿನ್ನೆಯ ಕ್ಯಾಬಿನೇಟನಲ್ಲೂ ವರ್ಗಾವಣೆ ವಿಚಾರದ ಬಗ್ಗೆ ಚರ್ಚೆಯಾಗಿದ್ದು,ವರ್ಗಾವಣೆ ದಂಧೆ ಆರೋಪದಲ್ಲಿ ಹುರುಳಿದ್ಯೋ ಇಲ್ವೋ ಗೊತ್ತಿಲ್ಲ.ಆದ್ರೆ ಈ ವಿಚಾರ ವಿಪಕ್ಷಗಳಿಗೆ ಅಹಾರವಾಗ್ತಿದೆ.ಹೀಗಾಗಿ ಸಚಿವರುಗಳು ವರ್ಗಾವಣೆ ಗೆ ಕಡಿವಾಣ ಹಾಕುವಂತೆ ಸಿಎಂಗೆ ಮನವಿ ಮಾಡಿದ್ದಾರೆ. ಸರ್ಕಾರ ಸರಿಯಾಗಿ ಟೇಕ್ ಆಫ್ ಆಗ್ತಿದ್ದೆ...ಗ್ಯಾರಂಟಿ ಜಾರಿ ಬಳಿಕ ಸರ್ಕಾರದ ವರ್ಚಸ್ಸು ಹೆಚ್ಚಿದೆ.ಈ ಸಂದರ್ಭದಲ್ಲಿ ಸರ್ಕಾರಕ್ಕೆ ಡ್ಯಾಮೇಜ್ ಆಗೋದು ಬೇಡ ಎಂದು ಕೆಲ ಸಚಿವರು ಸಿಎಂಗೆ ಸಲಹೆ ನೀಡಿದ್ದಾರೆ.