ಮೊದಲು ನಾವೆಲ್ಲರು ಭಾರತೀಯರು ಎನ್ನುವುದನ್ನು ಪ್ರತಿಯೊಬ್ಬರು ಅರಿಯಬೇಕು. ಕನ್ನಡಿಗರು ಮತ್ತು ಮರಾಠಿಗರ ನಡುವೆ ಕೆಲ ಕಿಡಿಗೇಡಿಗಳು ವೈಮನಸ್ಸು ಮೂಡಿಸುತ್ತಿವೆ ಎಂದು ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ ನಗರದಲ್ಲಿ ಎಂಇಎಸ್ ಪುಂಡರ ಪುಂಡಾಟಿಕೆ, ಉದ್ಧಟತನದ ವರ್ತನೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಕೆಲವರು ಸ್ವಹಿತಾಸಕ್ತಿಗಾಗಿ ಇಂತಹ ಸಂಚು ನಡೆಸುತ್ತಿದ್ದಾರೆ. ಇದು ಭಾರತ, ಪಾಕ್ ಗಡಿ ಸಮಸ್ಯೆಯಲ್ಲ. ಮರಾಠಿಗರು ಉಗ್ರರಲ್ಲ. ನಾವೆಲ್ಲರು ಒಂದಾಗಿ ಸಹೋದರತ್ವದಿಂದ ಬಾಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.