ಮೂಗು ಮಾಡಿದವರಿಗಿಂತ ಮೂಗುತಿ ಮಾಡಿದವರನ್ನೇ ಹೆಚ್ಚು ಸ್ಮರಿಸಿದ್ರಂತೆ. ಹಾಗಾಗಿದೆ ಹುಬ್ಬಳ್ಳಿ ಏರ್ ಪೋರ್ಟ್ ಗೆ ಭೂಮಿ ನೀಡಿದ್ದ ಸಂತ್ರಸ್ತರ ರೈತರ ಸ್ಥಿತಿ. ಭೂಮಿ ಕೊಟ್ಟು 10 ವರ್ಷವಾದ್ರೂ ಸಂತ್ರಸ್ತರಿಗೆ ಸರಿಯಾದ ಪರಿಹಾರ ಇರಲಿ, ಒಂದು ಪುನರ್ವಸತಿ ಕಲ್ಪಿಸೋದಕ್ಕೂ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದರ ಮಧ್ಯೆ ನಾವು ಏರ್ ಪೋರ್ಟ್ ಗೆ ಅದನ್ನ ಮಾಡಿದ್ದೇವೆ ಈ ರೀತಿ ಕಡೆದು ಕಟ್ಟೆ ಹಾಕಿದ್ದೇವೆ ಅಂತ ರಾಜಕಾರಣಿಗಳು ಕ್ರೆಡಿಟ್ ಪಡೆಯಲು ಸರ್ಕಸ್ ಮಾಡ್ತಿದಾರೆ.