ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಏತಕ್ಕಾಗಿ ಬಿಡಬೇಕು ಎಂದು ಹಿರಿಯ ನಟ ಮಾಜಿ ಸಚಿವ ಅಂಬರೀಷ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷ, ಕೇಂದ್ರ ಸಚಿವ ಸ್ಥಾನ, ರಾಜ್ಯ ಸಚಿವ ಸ್ಥಾನ, ಶಾಸಕ ಸ್ಥಾನದಂತಹ ಹುದ್ದೆಗಳನ್ನು ನೀಡಿದೆ. ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲವಾದ್ದರಿಂದ ಕಾಂಗ್ರೆಸ್ ತ್ಯಜಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು. ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿರುವುದು ಸಂತಸದ ಸಂಗತಿ. ಕಾಂಗ್ರೆಸ್ ಸರಕಾರದ ಅವಧಿ