ನನ್ನ ಆಡಳಿತದಲ್ಲಿ ಅಶಿಸ್ತು ಮತ್ತು ದುಷ್ಕೃತ್ಯಗಳು ಹೆಚ್ಚಾದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ನಾನು ಸರ್ವಾಧಿಕಾರಿಯಾಗಿ ಬದಲಾಗಬೇಕಾಗುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಖಡಕ್ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.. ಯಾರೇ ಆಗಲಿ ಕಾನೂನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.ಕಾನೂನು ಪ್ರಕಾರ ಮತ್ತು ಜನರ ಪರವಾಗಿ ಕಾರ್ಯನಿರ್ವಹಿಸಬೇಕು ಎಂದರು . ನಾನು ತುಂಬಾ ಪ್ರಜಾಸತ್ತಾತ್ಮಕವಾಗಿ ಬದಲಾಗಿದ್ದೇನೆ ಎಂದು ನನ್ನ ಆಪ್ತರು ಹೇಳುತ್ತಿದ್ದಾರೆ. ಪ್ರತಿಯೊಬ್ಬರ ಅಭಿಪ್ರಾಯವನ್ನು ಆಲಿಸುವುದು ಮತ್ತು ಗೌರವಿಸುವುದು