ಹೊಸದ್ರಲ್ಲಿ ಅಗಸ ಎತೆತ್ತಿ ಒಗೆದಂಗೆ ಇಂದಿರಾ ಕ್ಯಾಂಟೀನ್ ಓಪನ್ ಆಗಿದ್ದೆ ಆಗಿದ್ದು. ಸಿದ್ದರಾಮಯ್ಯ ಕಾಲದಲ್ಲಿ ಹೇಗೋ ನಡೀತಿದ್ದ ಈ ಬಡವರ ಉಪಹಾರ ಮಂದಿರಗಳು ತದನಂತರ ಯಾಕೋ ಭಾರೀ ನಿರ್ಲಕ್ಷ್ಯಕ್ಕೆ ಒಳಗಾಯ್ತು. ಅಲ್ಲದೆ ಈ ವಿಚಾರ ರಾಜಕೀಯ ಕೆಸರೇರಾಚಟಕ್ಕೂ ಸಹ ಕಾರಣವಾಗಿತ್ತು. ಆದ್ರು ಸಹ ಹೇಗೋ ಇಂದಿರಾ ಕ್ಯಾಂಟೀನ್ ಗಳು ನಡೆದುಕೊಂಡು ಅಲ್ಲ, ತೆವಲಿಕೊಂಡು ಕಾರ್ಯಾಚರಣೆ ಮಾಡ್ತಿತ್ತು. ಆದ್ರೆ ಇದೀಗ ಶೋಚನೀಯ ಸ್ಥಿತಿ ತಲುಪಿದೆ.