ಯುವ ವಿಜ್ಞಾನಿಯೊಬ್ಬ ಅರಳುವ ಮುನ್ನವೇ ಹುಚ್ಚನಾಗಿದ್ದ ಕರುಣಾಜನಕ ಕಥೆ ಇದು. ಮಹಾರಾಷ್ಟ್ರದ ಔರಂಗಾಬಾದ್ ನಿವಾಸಿಯಾಗಿದ್ದ ರಾಜೇಶ್ ಎಂಬ ಹೆಸರಿನ ಯುವಕನೊಬ್ಬ ಕಳೆದ ಕೆಲ ತಿಂಗಳಿಂದ ಮನೆಯಿಂದ ನಾಪತ್ತೆಯಾಗಿದ್ದ. ಆತನಿಗಾಗಿ ಎಷ್ಟೇ ಹುಡುಕಾಡಿದ್ದರೂ, ಎಲ್ಲಿಯೂ ಪತ್ತೆಯಾಗಿರಲಿಲ್ಲ. ಆದರೆ, ಮಂಗಳೂರಿನ ಸಮೀಪ ಎರಡು ತಿಂಗಳ ಹಿಂದೆ ಆತ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಅಲ್ಲಿಯದೇ ಸಂಸ್ಥೆಯೊಂದರಲ್ಲಿ ಈಗ ಆರೋಗ್ಯ ಸುಧಾರಿಸಿಕೊಂಡು ಮನೆಗೆ ಮರಳಿದ್ದಾನೆ. ಆತನ ನೋವಿನ ಕಥೆಯನ್ನು ನೀವೇ ಓದಿ...