ಇಂದು ದೆಹಲಿಯಲ್ಲಿ ಹೈಕಮಾಂಡ್ ಜೊತೆ ಕಾಂಗ್ರೆಸ್ ನಾಯಕರು ಸಭೆ ನಡೆಸುತ್ತಿರುವುದರ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಯಾವ ಹೆಸರಿನಲ್ಲಿ ಹೋಗ್ತಾರೋ ಅದರ ಬಗ್ಗೆ ನಮಗೆ ಚಿಂತೆ ಇಲ್ಲ. ನಾವು ಒಂದು ಸಿದ್ಧಾಂತದಿಂದ ಹೋಗುವವರು, ಅನ್ಯರ ಡೊಂಕನ್ನ ನಾವ್ಯಾಕೆ ತಿದ್ದೋಣ. ಯಾದಗಿರಿ, ಗುಲ್ಬರ್ಗಾ ಸೇರಿ ಐದು ಜಿಲ್ಲೆಗಳಲ್ಲಿ ಮೀಟಿಂಗ್ ಮಾಡಿದ್ದೇವೆ. ಕುಮಾರಸ್ವಾಮಿ ಅವರು ವಾಪಸ್ ಬಂದ ಮೇಲೆ ದೇವೇಗೌಡರ ಅನುಮತಿ ತೆಗೆದುಕೊಂಡು ಕಾರ್ಯಾಧ್ಯಕ್ಷರನ್ನ ಮಾಡುತ್ತೇವೆ. ಕೆಲವು