ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆ ಕರೆದು ತಡವಾಗಿ ಬಂದಿದ್ದಕ್ಕೆ ಬಿಜೆಪಿ ನಾಯಕರು ಸಭೆ ತೊರೆದು ನಿರ್ಗಮಿಸಿದ್ದಾರೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಲ್ಲಿ ಮಳೆ ಹಾಗೂ ಪ್ರವಾಹ ನಿರ್ವಹಣೆ ಸಲುವಾಗಿ ಡಿಕೆಶಿ ಸಭೆ ಕರೆದಿದ್ರು. ಆದರೆ ಹೇಳಿದ್ದ ಸಮಯಕ್ಕೆ ಡಿಕೆಶಿವಕುಮಾರ್ ಬಂದಿಲ್ಲ.. ಬೇಕೆಂತಲೇ ಅವರು ನಮ್ಮನ್ನು ಕಾಯಿಸಿದ್ದಾರೆಂದು ಬಿಜೆಪಿ ನಾಯಕರು ಸಭೆಯಿಂದ ಹೊರ ನಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಅಶ್ವತ್ಥ್ ನಾರಾಯಣ, ಡಿಸಿಎಂ ಡಿ.ಕೆ ಶಿವಕುಮಾರ್ ನಮಗೆ ಸಭೆಗೆ