ಸಚಿವ ರಮೇಶ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಜತೆಗಿನ ಮುಸುಕಿನ ಗುದ್ದಾಟದ ಕಾರಣ ಕೇಂದ್ರ ಬಿಂದುವಾಗಿದ್ದ ಶಾಸಕಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬದಲಿಸಬೇಕೆಂಬ ಕೂಗು ಎದ್ದಿದೆ. ಈ ಕುರಿತು ಪಕ್ಷದ ಕಾರ್ಯಕರ್ತೆಯರಲ್ಲಿ ಪರ ಹಾಗೂ ವಿರೋಧಗಳ ಗುಂಪುಗಳು ರಚನೆಯಾಗಿವೆ.ಲಕ್ಷ್ಮೀ ಯವರನ್ನು ಬದಲಿಸದಂತೆ ಕೆಲವು ಪ್ರಭಾವಿ ಮಹಿಳಾ ಮುಖಂಡರು ಪಕ್ಷದ ವರಿಷ್ಠರನ್ನು