ಬೆಂಗಳೂರು-ಮಂಗಳೂರು ಕುಡ್ಲ ಎಕ್ಸ್`ಪ್ರೆಸ್ ಹಗಲು ರೈಲು ಸಂಚಾರಕ್ಕೆ ಮಂಗಳೂರು ಜಂಕ್ಷನ್`ನಲ್ಲಿ ಚಾಲನೆ ಸಿಕ್ಕಿದೆ. ಗೋವಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲ್ವೆ ಸಚಿವ ಸುರೇಶ್ ಪ್ರಭು ರೈಲ್ವೆ ಸಂಚಾರಕ್ಕೆ ಚಾಲನೆ ನೀಡಿದರು. ಈ ಹೊಸ ರೈಲು ಕೇವಲ 9 ಗಂಟೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ತಲುಪಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದಗೌಡ, ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಹಾಜರಿದ್ದರು.