ಕೇಂದ್ರ ಸರ್ಕಾರದ ನೋಟು ನಿಷೇಧ ಕುರಿತಂತೆ ಪರ-ವಿರೋಧ ಚರ್ಚೆಗಳು ಮುಂದುವರೆದಿದ್ದು, ಎಟಿಎಂ ಮುಂದೆ 'ನೋ ಕ್ಯಾಶ್' ಎಂಬ ಬೋರ್ಡ್ ನೋಡಿ ನೋಡಿ ಜನರು ರೋಸಿ ಹೋಗಿದ್ದಾರೆ. ಕೇಂದ್ರದ ಈ ಏಕಾಏಕಿ ನಿರ್ಧಾರದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರೆದಿದೆ. ಬಿಹಾರ್ ಮುಖ್ಯಮಂತ್ರಿ, ಜನತಾ ದಳ (ಯು) ನಾಯಕ, ನಿತೀಶ್ ಕುಮಾರ್ ನೋಟು ನಿಷೇಧಕ್ಕೆ ಪ್ರಧಾನಿ ಮೋದಿ ಅವರಿಗೆ ಬಹಿರಂಗ ಬೆಂಬಲ ನೀಡಿರಬಹುದು. ಆದರೆ ಬೆಂಗಳೂರು ನಗರದಲ್ಲಿ ಜೆಡಿ(ಯು) ಶುಕ್ರವಾರ ವಿನೂತನವಾಗಿ ಪ್ರತಿಭಟನೆ ನಡೆಸಿದೆ.