ಪರಸ್ಪರ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಗಟ್ಟಿ ನಿರ್ಧಾರ ಮಾಡಿ ಮದುವೆಯಾಗಿದ್ದ ಜೋಡಿಗೆ ಆಗಬಾರದ್ದು ಆಗಿದೆ. ಯುವ ಜೋಡಿ ಪತಿ ವಿನೋದ್, ಪತ್ನಿ ತ್ರಿವೇಣಿ ಮೇಲೆ ಮಾರಣಾಂತಿಕ ದಾಳಿ ನಡೆದಿದ್ದು ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಪ್ಪಳದ ಕಾರಟಗಿಯಲ್ಲಿ ಈ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡಿರುವ ಪತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್.ಡಿ.ಎಫ್.ಸಿ ಬ್ಯಾಂಕಿನಲ್ಲಿ ವಿನೋದ್ ಮ್ಯಾನೇಜರ್ ಆಗಿದ್ದರೆ, ತ್ರಿವೇಣಿ ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು.