ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿ ವಾರ ಕಳೆದರೂ ಇನ್ನೂ ಸಚಿವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿರಲಿಲ್ಲ.ಇಂದು ಎಲ್ಲಾ ಸಚಿವರು ವಿಕಾಸೌಧದಲ್ಲಿರುವ ತಮ್ಮ ಸಚಿವಾಲಯದ ಕೊಠಡಿಗೆ ಆಗಮಿಸಲಿದ್ದು, ಪೂಜೆ ಮಾಡಿ ಕೋಣೆ ಪ್ರವೇಶಿಸಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.ಶುಕ್ರವಾರ ರಾತ್ರಿ ಖಾತೆ ಹಂಚಿಕೆಯಾದ ಹಿನ್ನಲೆಯಲ್ಲಿ ಸಚಿವರು ಇಂದು ತಮ್ಮ ತಮ್ಮ ಇಲಾಖೆಯ ಅಧಿಕಾರ ಸ್ವೀಕರಿಸಲಿದ್ದಾರೆ. ಕೆಲವು ಸಚಿವರು ಇಂದು ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಲಿದ್ದಾರೆ.ತಾಜಾ ಸುದ್ದಿಗಳನ್ನು ಓದಲು ವೆಬ್