ಬೆಂಗಳೂರು: ಕೊರೋನಾ ಪ್ರಕರಣ ಹೆಚ್ಚುತ್ತಿರುವ ಕಾರಣ ಜನರು ಲಾಕ್ ಡೌನ್ ಭೀತಿಯಲ್ಲಿದ್ದಾರೆ. ಒಂದು ವೇಳೆ ಲಾಕ್ ಡೌನ್ ಮಾಡುವುದಾಗಿ ಸರ್ಕಾರ ಮುನ್ಸೂಚನೆ ಕೊಟ್ಟರೂ ತಮ್ಮ ತಮ್ಮ ಊರಿಗೆ ಹೋಗಲು ಸರ್ಕಾರಿ ಬಸ್ ಗಳೇ ಇಲ್ಲ ಎಂಬ ಸ್ಥಿತಿ ಆಗಿದೆ. ಹೀಗಾಗಿ ಸಾರಿಗೆ ಮುಷ್ಕರದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ನೆಟ್ಟಿಗರು ಸಾಮಾಜಿಕ ಜಾಲತಾಣದ ಮೂಲಕ ಕಿಡಿ ಕಾರುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ನೀವು ಹೀಗೇ ಮುಷ್ಕರ ಮಾಡುತ್ತಿದ್ದರೆ ಲಾಕ್