ಪ್ರತಿನಿತ್ಯ ಆ ರಸ್ತೆ ಮೂಲಕ ನೂರಾರು ಮಂದಿ ಓಡಾಡುತ್ತಾರೆ. ಆದ್ರೆ ಓಡಾಡಬೇಕಾದ್ರೆ ಪ್ರಾಣವನ್ನ ತಮ್ಮ ಕಪಿ ಮುಷ್ಟಿಯಲ್ಲಿ ಹಿಡಿದು ಸಾಗುತ್ತಾರೆ. ಆ ಊರಿಗೊಂದು ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ಸುಮಾರು ಮೂರು ದಶಕಗಳು ಕಳೆದಿದೆ. ಆದ್ರೆ ಇದೀಗ ಶೀಥಿಲಾವ್ಯಸ್ಥೆಯಲ್ಲಿರುವ ಟ್ಯಾಂಕ್ ಕೂಡಲೇ ತೆರವು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.