ಐಟಿ ಇಲಾಖೆ ಮತ್ತೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಆಪ್ತರ ಮೇಲೆ ಕೆಂಗಣ್ಣು ಬೀರಿದೆ. ಬೆಳ್ಳಂ ಬೆಳಗ್ಗೆ ವಿಜಯ್ ಮುಳಗುಂದ ಮನೆ ಸೇರಿ ಕೆಲ ಆಪ್ತರ ಮನೆಗಳ ಮೇಲೆ ದಾಳಿ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ನಮ್ಮ ಬಳಿಯೂ ಅಸ್ತ್ರ ಬ್ರಹ್ಮಾಸ್ತ್ರಗಳಿವೆ ಎಂದು ಮಾರ್ಮಿಕವಾಗಿ ಉತ್ತರಿಸಿದ್ಧಾರೆ.