ಪಿಎಸ್ ಐ ನೇಮಕಾತಿ ಅಕ್ರಮ ಪರೀಕ್ಷೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 21 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಂಜುನಾಥ ಸಿಐಡಿ ಗೆ ಸೆರೆಂಡರ್ ಆಗಿದ್ದಾರೆ. ಕಲಬುರಗಿ ನಗರದ ಐವನ್ ಶಾಹಿ ಸಿಐಡಿ ಕಛೇರಿಗೆ ಆಟೋದಲ್ಲಿ ಬಂದು ಸಿಐಡಿ ಗೆ ನೀರಾವರಿ ಇಲಾಖೆ ಇಂಜಿನಿಯರ್ ಮಂಜುಬನಾಥ್ ಮೆಳಕುಂದಿ ಶರಣಾಗಿದ್ದಾರೆ. ಇಷ್ಟು ದಿನ ಮಂಗಳೂರಿನಲ್ಲಿ ಇರುವದಾಗಿ ಹೇಳಿದ ಮಂಜುನಾಥ್ ಆದರೆ ಇಂದು ತಾನೇ ಸಿಐಡಿ ಕಚೇರಿಗೆ ಬಂದು ಸೆರೆಂಡರ್ ಆಗಿದ್ದಾರೆ.