ತುಮಕೂರು :ಬಾಬ್ರಿ ಮಸೀದಿ ಧ್ವಂಸ ಮಾಡಿದಾಗ ನಾನು ಅಯೋಧ್ಯೆಗೆ ಭೇಟಿ ನೀಡಿದ್ದೆ. ಆಗ ಅಲ್ಲಿ ಮಂದಿರ ಟೂರಿಂಗ್ ಟಾಕೀಸಿನಂತೆ ಇದ್ದಿದ್ದು ನಿಜ. ಬೊಂಬೆಯನ್ನು ಅದರಲ್ಲಿ ಇಟ್ಟಿದ್ದೂ ಸಹ ನಿಜ. ನಾನು ಅದನ್ನೇ ಹೇಳಿದ್ದೇ.ನೆ ಆ ಬೊಂಬೆಯನ್ನೇ ಟೂರಿಂಗ್ ಟಾಕೀಸ್ ಎಂದು ಹೇಳಿಲ್ಲ. ಬೊಂಬೆ ಅನ್ನೋ ಕಾರಣಕ್ಕೆ ತಿರಸ್ಕಾರದಿಂದ ಮಾತನಾಡಬಾರದು. ಬೊಂಬೆಯಲ್ಲಿಯೂ ದೈವತ್ವ ಇರುತ್ತದೆ ಎಂದು ಹೇಳಿರುವ ರಾಜಣ್ಣ, ನಾವು ರೈತ ಸಮುದಾಯದವರು ಸಗಣಿ, ಕಲ್ಲು ಪ್ರತಿಯೊಂದಕ್ಕೂ ಪೂಜೆ ಮಾಡುತ್ತೇವೆ ಎಂದಿದ್ದಾರೆ.