ಬೆಂಗಳೂರು: ಡಿವೈಎಸ್ ಪಿ ಲಕ್ಷ್ಮೀ ಸಾವಿಗೆ ನಿಜವಾದ ಕಾರಣವೇನೆಂದು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಲಕ್ಷ್ಮೀಗೆ ಪೊಲೀಸ್ ಇಲಾಖೆಯಲ್ಲಿದ್ದ ಇನ್ನೊಬ್ಬ ಅಧಿಕಾರಿ ಜತೆಗಿನ ಸ್ನೇಹದ ವಿಚಾರವಾಗಿ ಸಹೋದರಿ ಜತೆ ಕಿತ್ತಾಟವಾಗಿತ್ತು. ಇದೇ ಅವರ ಸಾವಿಗೆ ಕಾರಣವಾಯ್ತು ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.