ಸರಕಾರಿ ಜಾಗ, ಉದ್ಯಾನವನ ಹೀಗೆ ಎಲ್ಲಿ ಬೇಕಂದರಲ್ಲಿ ಚರ್ಚಗಳು...ದೇವಸ್ಥಾನಗಳು... ತಲೆ ಎತ್ತುವಂತಿಲ್ಲ. ಈಗಾಗಲೇ ಸುಪ್ರಿಂಕೋರ್ಟ ಸ್ಪಷ್ಟ ಆದೇಶ ನೀಡಿದ್ದು, ಇಂಥ ಸ್ಥಳಗಳಲ್ಲಿ ಶೃದ್ಧಾ ಭಕ್ತಿಯ ಕೇಂದ್ರ ಸ್ಥಾಪಿಸುವಂತಿಲ್ಲ ಎಂದು ಆದೇಶವನ್ನು ನೀಡಿದೆ. ಆದ್ರೇ ಇದೆಲ್ಲವನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಾಣವಾಗುತ್ತಿದೆ.ಪೋಲೀಸ್ ಇಲಾಖೆ ಕಾರವಾರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಸೇರಿದ ಜಾಗದಲ್ಲಿ ಚರ್ಚನ್ನು ನಿರ್ಮಿಸುತ್ತಿದೆ. ಈ ಹಿಂದೆ ಕೆಲ ಕ್ರಿಶ್ಚಿಯನ್ ಧರ್ಮಿಯರು ಪೊಲೀಸ್ ಹೆಡ್ ಕ್ವಾರ್ಟರ್ ನಲ್ಲಿ ಒಂದು ಕೋಣೆಯಲ್ಲಿ