ಪಠ್ಯ ಪುಸ್ತಕ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ವಿವಾದ ಮುಗಿಯುವ ಲಕ್ಷಣ ಕಾಣ್ತಿಲ್ಲ. ನಗರದಾದ್ಯಂತ ಪಠ್ಯಪುಸ್ತಕ ವಿಷಯವಾಗಿ ವಕೀಲರು, ಕನ್ನಡಪರ ಸಂಘಟನೆಯ ನಾಯಕರು ಸೇರದಂತೆ ಹಲವು ಚಿಂತಕರು ಆಕ್ರೋಶ ಹೊರಹಾಕ್ತಿದ್ದಾರೆ.ಇಂದು ಬೀದಿಗಿಳಿದ್ದು ಪಠ್ಯ ಪುಸ್ತಕ ಪರಿಷ್ಕರಣೆ ಮಾಡಬೇಕೆಂದು ಒತ್ತಾಯಿಸಿದ್ರು. ಅಷ್ಟೇ ಅಲ್ಲದೆ ಬರಗೂರು ರಾಮಚಂದ್ರಪ್ಪನವರ ಸಮಿತಿಯ ಪಠ್ಯವನ್ನೇ ಅಳವಡಿಸಬೇಕೆಂದು ಆಗ್ರಹಿಸಿದ್ರು.ರಾಜಧಾನಿಯಲ್ಲಿ ಪಠ್ಯ ಪುಸ್ತಕ ವಿಷಯವಾಗಿ ಒಂದರ ನಂತರ ಮತ್ತೊಂದರಂತೆ ಧರಣಿ ನಡೆಯುತ್ತಿತ್ತು. ಒಂದು ಕಡೆ ಮಲೇಶ್ವರಂನ್ನ ಸಂಪಿಗೆ ರಸ್ತೆಯ