ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆ ನಾಡಿಗೆ ನಾಡೇ ದುಃಖದ ಮಡುವಿನಲ್ಲಿದೆ. ಭಕ್ತರಂತೂ ದಿಗ್ಭ್ರಾಂತರಾಗಿದ್ದಾರೆ. ಎಲ್ಲೆಡೆ ಶ್ರದ್ಧಾಂಜಲಿ ಕಾರ್ಯಕ್ರಮ ಸೇರಿದಂತೆ ಶ್ರೀಗಳ ನಿಧನಕ್ಕೆ ಕಂಬನಿ ಮಿಡಿಯಲಾಗುತ್ತಿದೆ. ಇಂತಹ ದುಃಖದ ಸನ್ನಿವೇಶಕ್ಕೆ ನಾಗರಹಾವೊಂದು ಕಂಬನಿ ಮಿಡಿದಿದೆ.ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ತುಮಕೂರು ಸಿದ್ಧಗಂಗಾ ಶ್ರೀ ಗಳ ಬ್ಯಾನರ್ ಮುಂದೆ ನಿಂತು ನಾಗರಹಾವು ನಮಿಸಿರುವ ಫೋಟೋ ಫುಲ್ ವೈರಲ್ ಆಗಿದೆ. ಚನ್ನಗಿರಿ ತಾಲೂಕಿನ ನಾಗೇನಹಳ್ಳಿ ಗ್ರಾಮದ