ಬಳ್ಳಾರಿ: ಬಳ್ಳಾರಿ ಲೋಕಸಭೆ ಉಪಚುನಾವಣೆ ಕಣ ರಂಗೇರುತ್ತಿದ್ದು, ಗಣಿ ದಣಿ ಜನಾರ್ಧನ ರೆಡ್ಡಿ ವಿರುದ್ಧ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಾಕ್ ಪ್ರಹಾರ ನಡೆಸಿದ್ದಾರೆ.ದೇಶವೇ ಬರಪೀಡಿತವಾಗಿದ್ದಾಗ ನೀವು ಚಿನ್ನದ ಕುರ್ಚಿ, ತಟ್ಟೆ ಲೋಟ ಪ್ರದರ್ಶಿಸುತ್ತಿದ್ದಿರಿ. ಇಷ್ಟೊಂದು ಹಣ ನಿಮಗೆ ಎಲ್ಲಿಂದ ಬಂತು? ಇದೆಲ್ಲಾ ಅಕ್ರಮ ಸಂಪಾದನೆ ತಾನೇ? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.ಅಷ್ಟೇ ಅಲ್ಲದೆ, ನಾನು ನಿಮ್ಮ ಸವಾಲು ಸ್ವೀಕರಿಸಿ ಬಳ್ಳಾರಿಗೆ ಪಾದಯಾತ್ರೆ ಮಾಡಿದ ಮೇಲೆ ಬಳ್ಳಾರಿ ರಿಪಬ್ಲಿಕ್ ಕುಸಿಯಲಾರಂಭಿಸಿತು. ಅದರ