ಮೀನಿನ ಬಲೆಯಲ್ಲಿ ನಾಗರ ಹಾವು ಸಿಲುಕಿಕೊಂಡಿತ್ತು. ಇದನ್ನು ನೋಡಿದ ಸ್ಥಳೀಯರು ಭಯಗೊಂಡಿದ್ದರು.ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿಯ ತಿರಗನಮನೆ ಶನಿಯಾರ ನಾಯ್ಕ ಎಂಬುವವರ ಮನೆಯಲ್ಲಿನ ಮೀನಿನ ಬಲೆಯಲ್ಲಿ ಸಿಕ್ಕಿಬಿದ್ದ ನಾಗರಹಾವನ್ನು ಸ್ಥಳೀಯರು ಬಲೆಯಿಂದ ಬಿಡಿಸಿ ಹಾವಿಗೆ ಜೀವದಾನ ನೀಡಿದ್ದಾರೆ. ಮೀನು ಬಲೆಯಲ್ಲಿ ಸಿಕ್ಕಿಬಿದ್ದಿದ್ದು ತಪ್ಪಿಸಿಕೊಳ್ಳಲಾಗದೇ ಪರಿತಪಿಸುತ್ತಿದ್ದ ನಾಗರ ಹಾವಿಗೆ ಯಾವುದೇ ರೀತಿಯಲ್ಲಿ ಹಾನಿ ಪಡಿಸದೇ ನಯವಾಗಿ ಬಲೆಯಿಂದ ಬೇರ್ಪಡಿಸಲಾಯಿತು. ಹೂ ತೋಟದಲ್ಲಿ ದನಕರುಗಳು ಒಳ ಬರದಂತೆ ತಡೆಯಲು ಹಾಕಲಾಗಿದ್ದ ಮೀನು ಬಲೆಗೆ