ಶ್ರಾವಣ ಮಾಸದ ಅಂಗವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಸಹಸ್ರಾರು ಭಕ್ತರ ಹರ್ಘೋದ್ಘಾರದ ನಡುವೆ ನಡೆಯಿತು.ಆನೇಕಲ್ ಪಟ್ಟಣದಲ್ಲಿ ಅದ್ದೂರಿಯಾಗಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.ಲೋಕ ಕಲ್ಯಾಣಾರ್ಥವಾಗಿ ಜಯಕರ್ನಾಟಕ ಸಂಘಟನೆಯಿಂದ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಸಾವಿರಾರು ಜನರು ಭಾಗವಹಿಸಿ ಲಕ್ಷ್ಮಿ ಹಾಗೂ ಪದ್ಮಾವತಿ ಸಮೇತ ಶ್ರೀನಿವಾಸನ ಕಲ್ಯಾಣವನ್ನ ಕಣ್ಣು ತುಂಬಿಕೊಂಡರು. ಸಾಕ್ಷತ್ ತಿರುಪತಿಯ ಮಾದರಿಯಲ್ಲೇ ನಡೆದ ಕಾರ್ಯಕ್ರಮ ಭಕ್ತರಿಗೆ ವಿಶೇಷ ಅನುಭವ ತಂದುಕೊಟ್ಟಿತ್ತು.ತಿರುಪತಿ ಮಾದರಿಯಲ್ಲೇ ದೇವಾಲಯದ ಸೆಟ್ ಗಳನ್ನ ಹಾಕಿ ಆಗಮಿಕರು ವೆಂಕಟೇಶ್ವರನ