ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಏ. 10 ರಂದು ವಿಚಾರಣೆಗೆ ಹಾಜರಾಗುವಂತೆ ಮಹಿಳಾ ಆಯೋಗ ಡೆಡ್ ಲೈನ್ ನಿಗದಿಪಡಿಸಿದೆ.ಮಹಿಳಾ ಆಯೋಗ ತೇಜಸ್ವಿ ವಿರುದ್ಧ ಜಾರಿಮಾಡಿದ್ದ ನೋಟಿಸ್ ಅನುಸಾರ, ಇಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ತೇಜಸ್ವಿ ಪರ ವಕೀಲರ ಮನವಿ ಮೇರೆಗೆ ಏ. 10 ರವರೆಗೆ ವಿಚಾರಣೆ ಮುಂದೂಡಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗ ಲಕ್ಷ್ಮೀ ಬಾಯಿ ತಿಳಿಸಿದ್ದಾರೆ. ಮೀ ಟೂ ಆರೋಪದಡಿ ಕಾಂಗ್ರೆಸ್