ಮೈಸೂರು: ಇವತ್ತೂ ಮತ್ತು ನಾಳೆ ನಮ್ಮೆನ್ನೆಲ್ಲಾ ಪ್ರಭಾವಿಸುವ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಕುತೂಹಲ ಮತ್ತು ವಿಸ್ಮಯ ಭರಿತವಾದದ್ದು ಎಂದು ವನ್ಯಜೀವಿ ತಜ್ಞ ಕೃಪಾಕರ ತಿಳಿಸಿದರು. ಮಹಾರಾಜ ಕಾಲೇಜಿನ ಕಾಜಾಣ ಬಳಗ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ತೇಜಸ್ವಿ-ಅನುಭವಲೋಕ ಕುರಿತ ಸಂವಾದದಲ್ಲಿ ವಿದ್ಯಾರ್ಥಿಗಳೊಂದಿಗೆ ಅವರು ಮಾತನಾಡಿದರು.