ಶೀರೂರು ಶ್ರೀಗಳಿಗೆ ಭೂಗತ ನಂಟು ಇದೆಯೆಂಬ ಸುದ್ದಿ ಹರಿದಾಡುತ್ತಿದ್ದಂತೆ ಪೊಲೀಸರು ಮುಂಬೈಗೆ ತೆರಳಿದ್ದಾರೆ. ಅಲ್ಲಿ ಶ್ರೀಗಳಿಗೆ ಆಪ್ತರಾಗಿದ್ದ ಉದ್ಯಮಿಗಳ ವಿಚಾರಣೆ ಮಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅಲ್ಲದೆ ಕಲ್ಸಂಕದಲ್ಲಿರುವ ಕನಕ ಮಾಲ್ನ ಪಾಲುದಾರ ಕೂಡ ಮುಂಬೈನಲ್ಲಿದ್ದು, ಆತನನ್ನು ಪೊಲೀಸರು ವಿಚಾರಣೆ ಮಾಡುವ ಸಾಧ್ಯತೆ ಇದೆ.ಶೀರೂರು ಶ್ರೀಗಳ ನಿಗೂಢ ಸಾವಿನ ಪ್ರಕರಣದ ಕುರಿತಂತೆ ಉಡುಪಿಯ ಶೀರೂರು ಮಠದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರ ವಶದಲ್ಲಿರುವ ಶ್ರೀಗಳ ಅಂಗರಕ್ಷಕ ಜಗದೀಶ್ (ಜಗ್ಗ) ಎಂಬಾತನನ್ನು