ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಸಹಜವಾಗಿಯೇ ಅಸಮಾಧಾನಿಗಳ ಪಟ್ಟಿಯೂ ಬೆಳೆದಿತ್ತು. ಇದೀಗ ಅಸಮಾಧಾನದ ಗಾಯಕ್ಕೆ ಮದ್ದು ಹಚ್ಚುವ ಕೆಲಸ ಯಡಿಯೂರಪ್ಪನದ್ದಾಗಿದೆ.ಟಿಕೆಟ್ ಸಿಗದ ನಾಯಕರು ತಮ್ಮ ಬೆಂಬಲಿಗರ ಮೂಲಕ ಪ್ರತಿಭಟನೆ ನಡೆಸಿ ಹೈಕಮಾಂಡ್ ಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವರು ಬಹಿರಂಗವಾಗಿಯೇ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಹೀಗಾಗಿ ಅಸಮಾಧಾನದ ರಂಧ್ರ ದೊಡ್ಡದಾಗುವ ಮೊದಲು ಅದನ್ನು ಶಮನಗೊಳಿಸುವ ಕೆಲಸವನ್ನು ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ನೀಡಿದೆ ಎನ್ನಲಾಗಿದೆ.