ಪಂಚರಾಜ್ಯ ಚುನಾವಣೆ ಬಳಿಕ ಇವಿಎಂ ಮೆಶಿನ್ ಅಕ್ರಮದ ಬಗ್ಗೆ ಆರೋಪಗಳು ಕೇಳಿಬಂದವು. ಉತ್ತರಪ್ರದೇಶದ ಮಾಜಿ ಸಿಎಂ ಮಾಯಾವತಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. ದೆಹಲಿ ಸಿಎಂ ಕೇಜ್ರಿವಾಲ್ ಸಹ ಚಕಾರ ಎತ್ತಿದ್ದರು. ಸಹಜವಾಗಿಯೇ ಇದರ ಎಫೆಕ್ಟ್ ಕರ್ನಾಟಕದ ಉಪಚುನಾವಣೆ ಮೇಲೂ ಆಗಿದೆ. ಇವಿಎಂ ಮೇಲಿನ ಅನುಮಾನ ನಿವಾರಣೆಗೆ ಮತ್ತು ಮತದಾರ ತಾನು ಹಾಕಿದ ಮತ ಯಾರಿಗೆ ಹೋಗಿದೆ ಎಂಬುದನ್ನ ಖಚಿತಪಡಿಸಿಕೊಳ್ಳಲು ವಿವಿ ಪ್ಯಾಟ್(ವೋಟರ್ ವೆರಿಫೈಡ್ ಪೇಪರ್ ಆಡಿಟ್) ಯಂತ್ರ ಅಳವಡಿಸಲಾಗಿದೆ.