ಹೊಸಕೋಟೆ : ಬಚ್ಚೇಗೌಡ ನನ್ನನ್ನು ಸೋಲಿಸಿದರು ಎಂಬ ಎಂಟಿಬಿ ನಾಗರಾಜ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಬಿ.ಎನ್. ಬಚ್ಚೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸಕೋಟೆ ಬೈಎಲೆಕ್ಷನ್ ವೇಳೆ ನಾನು ಬಂದೇ ಇರಲಿಲ್ಲ. ನಾನು ಯಾರ ಪರವೂ ಪ್ರಚಾರ ಮಾಡಿರಲಿಲ್ಲ. ಪ್ರತ್ಯಕ್ಷ, ಪರೋಕ್ಷವಾಗಿ ನಾನು ಯಾರನ್ನೂ ಬೆಂಬಲಿಸಿಲ್ಲ. ಬೈಎಲೆಕ್ಷನ್ ನಲ್ಲಿ ನಾನು ಯಾರ ಪರವೂ ಪ್ರಚಾರ ಮಾಡಿಲ್ಲ. ಈಗ ನಗರಸಭೆ ಚುನಾವಣೆಗೂ ನಾನು ಪ್ರಚಾರ ಮಾಡಿಲ್ಲ ಎಂದು