ಸುತ್ತಲೂ ಹಸಿರು ತಣ್ಣಗೆ ಮೈಕೊರೆವ ಚಳಿ, ತಂಪಾದ ಗಾಳಿಯ ಜೊತೆಗೆ ಎತ್ತನೋಡಿದರತ್ತ ಮಂಜು ಅಲ್ಲಲ್ಲಿ ಕೂಗುವ ಹಕ್ಕಿಗಳ ಕೂಗು, ಆಗತಾನೇ ಉದಯಿಸೋ ಸೂರ್ಯ ಅದೆಲ್ಲೋ ಗೀಳಿಡುವ ಪ್ರಾಣಿಗಳ ಶಬ್ದ ಇವನ್ನೆಲ್ಲಾ ನೀವು ಅನುಭವಿಸಬೇಕು ಎಂದು ಬಯಸಿದರೆ, ಕರ್ನಾಟದಲ್ಲಿರುವ ಈ ಪ್ರದೇಶಕ್ಕೆ ನೀವು ಭೇಟಿ ನೀಡಲೇಬೇಕು. ಹೌದು ಪಕೃತಿಯ ಸೊಬಗು ಸವಿಯುತ್ತಾ ನಿಮ್ಮ ಪ್ರಯಾಣವನ್ನು ನೆನಪಿನಲ್ಲಿ ಉಳಿಯುವಂತೆ ಮಾಡುವ ಉತ್ತಮ ಪ್ರವಾಸಿತಾಣ ಇದಾಗಿದ್ದು, ನೀವು ಒಂದು ಬಾರಿ ಇಲ್ಲಿಗೆ ಭೇಟಿ ನೀಡಿದ್ದೇ ಆದಲ್ಲಿ ನೀವು ಆ ಪ್ರವಾಸದ ಆ ನೆನಪನ್ನು ಎಂದಿಗೂ ಮರೆಯಲಾರಿರಿ.